Advertisement

CM Bommai Pressmeet

02:23 PM May 07, 2022 | Team Udayavani |
ಪಿಎಸ್ ಐ ನೇಮಕ ಹಗರಣ ಸಂಬಂಧ ದಿನಕ್ಕೊಂದು ಹೇಳಿಕೆ ಕೊಡುವ ರಾಜಕಾರಣಿಗಳು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಹಗರಣದ ಕಿಂಗ್ ಪಿನ್ ಹೆಸರು ಹೇಳಿದರೆ ಸರಕಾರ ಉರುಳಿ ಹೋಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು, ಯಾವುದೇ ಹೇಳಿಕೆ ಕೊಡಲಿ, ಆದರೆ ಅದಕ್ಕೆ ಸಂಬಂಧಪಟ್ಟ ದಾಖಲೆ ಒದಗಿಸಬೇಕು ಎಂದು ಹೇಳಿದರು. ದಾವೋಸ್ ಶೃಂಗ ಸಭೆಗೆ ತೆರಳುವುದಕ್ಕೂ‌ ಮುನ್ನ ವರಿಷ್ಠರು ಸೂಚಿಸಿದರೆ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು
Advertisement

Udayavani is now on Telegram. Click here to join our channel and stay updated with the latest news.

Next