Advertisement

Fire accident in Koteshwar

04:27 PM Jan 11, 2023 | Team Udayavani |
ಕೋಟೇಶ್ವರ: ಕೋಟೇಶ್ವರ ಪೇಟೆಯ ಎಸ್‌ಬಿಐ ಬ್ಯಾಂಕ್‌ ಸನಿಹದ ತಿರುವಿನ ಸಂಕೀರ್ಣದ ಮಹಾಲಕ್ಷ್ಮೀ ಕಂಗನ್‌ ಸ್ಟೋರ್‌ನಲ್ಲಿ ಜ.10ರಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಅಲ್ಲಿನ ಬೆಳೆಬಾಳುವ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಸ್ಟೋರ್‌ನ ಮಾಲಕ ಸುಧಾಕರ ಜೋಗಿ ಅವರು ಜ.10ರಂದು ಮಧ್ಯಾಹ್ನ ಕಾರ್ಯನಿಮಿತ್ತ ಅಂಗಡಿ ಮುಚ್ಚಿ ಕೋಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಹೊತ್ತಿಕೊಂಡು ಬೆಲೆಬಾಳುವ ಬಳೆ, ಆಟಿಕೆ ಸಾಮಾನುಗಳು, ಮನೆಬಳಕೆಯ ವಸ್ತುಗಳು ಬೆಂಕಿಗೆ ಆಹುತಿಯಾಯಿತು. ಅಂಗಡಿಯ ಒಂದು ಪಾರ್ಶ್ವದಲ್ಲಿ ಹೊಗೆ ಹೊತ್ತಿಕೊಳ್ಳುತ್ತಿದ್ದಂತೆ ಆಸುಪಾಸಿನವರು ಬೆಂಕಿ ಆರಿಸಲು ಪ್ರಯತ್ನಪಟ್ಟರೂ ಅಷ್ಟರಲ್ಲೇ ಸಂಪೂರ್ಣವಾಗಿ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಗ್ರಾಮಸ್ಥರು ಸಹಕರಿಸಿದರು. ನಗದು ಬೆಂಕಿಗೆ ಆಹುತಿ: ಅಂಗಡಿ ಬಾಡಿಗೆ ಸಹಿತ ವ್ಯವಹಾರಕ್ಕಾಗಿ ಇಟ್ಟಿದ್ದ 2 ಲಕ್ಷ ರೂ. ನಗದು ಹಣ ಬೆಂಕಿಗೆ ಆಹುತಿಯಾಗಿರುವುದಾಗಿ ಸುಧಾಕರ ಜೋಗಿ ಉದಯವಾಣಿಗೆ ತಿಳಿಸಿದ್ದಾರೆ. ಬೆಂಕಿ ಹತ್ತಿ ಉರಿದ ಪರಿಣಾಮ ಕಟ್ಟಡವು ಬಿರುಕು ಬಿಟ್ಟಿದೆ.
Advertisement

Udayavani is now on Telegram. Click here to join our channel and stay updated with the latest news.

Next